ಶನಿವಾರ, ಏಪ್ರಿಲ್ 18, 2015

ಕ್ಯಾಂಪಸ್ನಲ್ಲಿ "ನಿರ್ಮಲ ಪರಿಸರ, ಸ್ವಚ್ಛತೆ ನಿರಂತರ ಪರಿಕಲ್ಪನೆ"

ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ದೊರೆತು ಹಲವು ತಿಂಗಳುಗಳೆ ಸಂದಿವೆ. ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ರಾಷ್ಟ್ರದಾದ್ಯಂತ ಹಲವಾರು ಸಂಘ- ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಅಭಿಯಾನಕ್ಕೆ ಕೈ ಜೋಡಿಸಿ ತಮ್ಮ ತಮ್ಮ ಪರಿಸರವನ್ನು ನಿರ್ಮಲವಾಗಿಡಲಾರಂಭಿಸಿದರು. ಸ್ವಚ್ಛ ಭಾರತ್ ಅಭಿಯಾನದ ಬಗ್ಗೆ ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ ತೀವ್ರ ತರವಾದ ಚಚರ್ೆಗಳು ನಡೆದು, ಪರ ವಿರೋಧ ಅಭಿಮತಗಳು ಸಂಗ್ರಹವಾಗುತ್ತಿರುವ ಈ ಸಂದರ್ಭದಲ್ಲಿ ರಾಜಕೀಯ ರಹಿತವಾದ ಸ್ವಯಂ ಪ್ರೇರಿತ ಪರಿಸರ ಕಾಳಜಿಯುಳ್ಳ ಹಲವಾರು ಸಂಸ್ಥೆಗಳು ಸದ್ದಿಲ್ಲದೆ, ಸುದ್ದಿಯಾಗದೆ ಸ್ವಚ್ಛತಾ ಅಭಿಯಾನ ಕೈಗೊಂಡು ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ.

Mangalore University facebook page photos

ಭಾರತದಲ್ಲಿಯೇ ಮೊದಲ ಬಾರಿಗೆ ವಿಶ್ವವಿದ್ಯಾನಿಲಯವೊಂದು ಹಲವಾರು ಗ್ರಾಮೀಣ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪರಿಸರ ಕ್ರಾಂತಿಗೆ ಕೈ ಹಾಕುವ ಮೂಲಕ ನಿರ್ಮಲ ಪರಿಸರ, ಸ್ವಚ್ಚತೆ ನಿರಂತರ ಎಂಬ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಿದೆ.

Mangalore University facebook page photos

ಹೌದು ಮಂಗಳೂರು ವಿಶ್ವವಿದ್ಯಾನಿಲಯವು ನವೆಂಬರ್ 2014ರಲ್ಲಿ ಮೊದಲಬಾರಿಗೆ ಸ್ವಚ್ಛತಾ ಅಭಿಯಾನ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ "ಪರಿಸರ ಸ್ನೇಹಿ" ಮಾದರಿ ವಿಶ್ವವಿದ್ಯಾನಿಲಯವಾಗಿ ಬಿಂಬಿತವಾಯಿತು. ಪ್ರಸ್ತುತ ಪ್ರತಿ ತಿಂಗಳ ಮೂರನೇ ಶುಕ್ರವಾರ ಸಂಜೆ 4.30 ಗಂಟೆಯಿಂದ ಕ್ಯಾಂಪಸ್ ಕ್ಲಿನಿಂಗ್ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. 
ಮಂಗಳಗಂಗೋತ್ರಿಯ ಅಸುಪಾಸಿನ ಗ್ರಾಮಗಳಾದ ಕೊಣಾಜೆ, ಅಸೈಗೊಳಿ ಗ್ರಾಮಗಳ ಬಸ್ಸು ನಿಲ್ದಾಣ, ವಾಣಿಜ್ಯ ಸಂಕೀರ್ಣ, ಕ್ಯಾಂಪಸ್ ಅವರಣದಲ್ಲಿರುವ ಶಾಲಾ ಕಾಲೇಜುಗಳನ್ನೂ ಒಳಗೊಂಡಂತೆ ವಿವಿಯ ಕ್ಯಾಂಪಸನ್ನುವಿದ್ಯಾರ್ಥಿಗಳು, ಉಪನ್ಯಾಸಕರು, ಸಂಶೋಧನಾರ್ಥಿಗಳು, ಬೋಧಕೇತರ ಸಿಬ್ಬಂದಿ ಹಾಗೂ ಸ್ಥಳಿಯ ಗ್ರಾಮೀಣ ಸಂಘಟನೆಗಳು ಸುಮಾರು 20 ಖಾಯಂ ತಂಡಗಳನ್ನಾಗಿ ಮಾಡಿಕೊಂಡು ಕ್ಯಾಂಪಸ್ ಕ್ಲಿನ್ ಮಾಡಲಾಗುತ್ತಿದೆ. ಘನ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಅದನ್ನು ಕಾರ್ಯ ಸೂಚಿಯಂತೆ ಬೆರ್ಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗೆಗಿನ ಪ್ರಾಕ್ಟಿಕಲ್ ಅಂಶಗಳೊಂದಿಗೆ, ಥಿಯರಿ ಕಾನ್ಸೇಪ್ಟ್ ಅರ್ಥಹಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ನಿಷೇದ ಮಾಡವ ಮೂಲಕ ಪರಿಸರ ಸ್ನೇಹಿ ಕ್ಯಾಂಪಸ್ ರೂಪಿಸುವ ಯೋಜನೆ ವಿವಿಯು ಹಮ್ಮಿಕೊಂಡಿದೆ. ಈ ಅಭಿಯಾನ ರಾಜಕಾರಣಿಗಳಂತೆ ಒಂದು ದಿನಕ್ಕೆ ಮಾತ್ರ ಸೀಮಿತವಾದ ಯೋಜನೆಯಲ್ಲ. ಪ್ರತಿ ಶೈಕ್ಷಣಿಕ ವರ್ಷದ ಸೆಮಿಸ್ಟರ್ಗಳಲ್ಲಿ ನಾಲ್ಕು ಬಾರಿಯಾದರೂ ಸ್ವಚ್ಛತಾ ಅಭಿಯಾನ ಮಾಡುವ ಕಾರ್ಯತಂತ್ರವನ್ನು ಯುನಿವರ್ ಸೀಟಿ ಹಮ್ಮಿಕೊಂಡಿದೆ.
 
ಮಂಗಳೂರು ನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಕೊಣಾಜೆ ಎಂಬ ಗ್ರಾಮದಲ್ಲಿ ವಿಶ್ವವಿದ್ಯಾನಿಲಯ ತನ್ನ ಕಾರ್ಯವ್ಯಾಪ್ತಿಯನ್ನಾಗಿ ಮಾಡಿಕೊಂಡಿದೆ. ಸುಮಾರು 333 ಎಕರೆ ವಿಸ್ತೀರ್ಣವಿರುವ ಕ್ಯಾಂಪಸ್ ಅರ್ಧದಷ್ಟು ಸಸ್ಯ ಶಾಮಲೆಯ ತವರಾಗಿ ವಿಶಿಷ್ಟ ಮರ ಗಿಡಗಳಿಂದ ಕಂಗೊಳಿಸುತ್ತಿದ್ದಾಳೆ. ಸಸ್ಯ ಕಾಶಿಯ ಈ ಕ್ಯಾಂಪಸ್ನ ಕಾಡುಗಳಲ್ಲಿ ಇಂದಿಗೂ ನವೀಲು, ಕಾಡುಕೋಳಿ, ಕಾಡು ಹಂದಿ, ಮೊಲಗಳಂತಹ ಹಲವಾರು ಪ್ರಾಣಿ-ಪಕ್ಷಿ ಸಂಕುಲಗಳು ತಮ್ಮ ಬದುಕನ್ನು ಕಟ್ಟಿಕೊಂಡಿದೆ. ಮಂಗಳ ಗಂಗೋತ್ರಿ ಇಂದಿಗೂ ತನ್ನ ವನ್ಯ ಸಂಪತ್ತನ್ನು ಹಾಗೇ ಉಳಿಸಿಕೊಂಡು ಬಂದಿರುವುದು ವಿವಿಯ ಪರಿಸರ ಪ್ರೀತಿಗೆ ಕೈಗನ್ನಡಿಯಾಗಿದೆ. 

Mangalore University facebook page photos

"ಜಗತ್ತು ಬದಲಾಗಬೇಕೆಂದು ಎಲ್ಲರು ಬಯಸುತ್ತಾರೆ, ತಾನು ಬದಲಾಗಬೇಕೆಂದು ಯಾರು ಯತ್ನಿಸುವುದಿಲ್ಲ ಎಂಬ ಲಿಯೋ ಟಾಲ್ ಸ್ಟಾಯ್ ಮಾತು ಆಧುನಿಕ ಯುವಜನತೆ ಬದಲಾಗಬೇಕೆಂಬುದನ್ನು ಸೂಚಿಸತ್ತದೆ.ರಸ್ತೆಗಳಲ್ಲಿ ಕಸ ಬಿಸಾಡುವುದನ್ನು, ಉಗುಳುವುದನ್ನು, ಮೂರ್ತವಿಸರ್ಜನೆ ಮಾಡುವುದನ್ನು ಕೈಬಿಟ್ಟರೆ ನಮ್ಮ ಪರಿಸರದ ಅರ್ಧದಷ್ಟು ರಕ್ಷಣೆ ಮಾಡಿದಂತೆ. ಯುನಿವರ್ಸಲ್ ಪರಿಕಲ್ಪನೆಯನ್ನು ಬದ್ಧಗೊಳಿಸುವ, ಜ್ಞಾನದ ಎಲ್ಲಾ ಮಜಲುಗಳನ್ನು ಒಳಗೊಳಿಸಿಕೊಳ್ಳುವ,ಬುದ್ಧಿ ಜೀವಿಗಳನ್ನು ರೂಪಿಸುವ ಪ್ಯಾಕ್ಟರಿಯಾದ ಭಾರತದ ವಿದ್ಯಾನಿಲಯಗಳಲ್ಲಿ ಈ ರೀತಿಯ ಹೊಸ ಅಭಿಯಾನದ  ಅಗತ್ಯತೆ ಹೆಚ್ಚಿದೆ .ಶಿಕ್ಷಣದೊಂದಿಗೆ ಸಾಮಾಜಿಕ ಬದ್ದತೆಯನ್ನು ರೂಪಿಸುವ ಮೂಲಕ ಭಾರತದಂತ  ಅಭಿವೃದ್ಧಿ ಪಥದತ್ತ ಸಾಗುವ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬಹುದು .ಈ ಮೂಲಕ ಇನ್ನಾದರೂ ದೇಶವ್ಯಾಪಿ ಶಿಕ್ಷಣ ಸಂಸ್ಥೆಗಳು ಪರಿಸರ ರಕ್ಷಣೆ ಮತ್ತು ಸ್ವಚ್ಚತೆಗೆ ಅಧ್ಯತೆ ನೀಡಬೇಕಾಗಿದೆ. ಇನ್ಯಾಕ್ ತಡ? ರಸ್ತೆಗೆ ಇಳಿದು ಕ್ಲಿನ್ ಮಾಡಿ. ರಾಜಕೀಯ ಮಾಡ್ಬೇಡಿ .


ಮುಸ್ತಫ .ಕೆ.ಹೆಚ್
ಪ್ರಥಮ ಎಂ.ಎ.ಕನ್ನಡ ವಿಭಾಗ
ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ
ಮಂಗಳಗಂಗೋತ್ರಿ ,
ಮಂಗಳೂರು .
 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ