ಶನಿವಾರ, ಏಪ್ರಿಲ್ 18, 2015



ಛಾಯಾಚಿತ್ರ ಚಂದ್ರಶೇಖರ್ ಎಂ.ಬಿ
ಸಾಂದರ್ಭಿಕ ಚಿತ್ರ
ಸುದರ್ಶನ ವಿಜಯದಲ್ಲಿ ಭಗ್ನಗೊಂಡ ನಾನು ಎಂಬ ಅಹಂಕಾರ
 ಮಂಗಳೂರು ವಿಶ್ವವಿದ್ಯಾನಿದ ಪ್ರಸಾರಾಂಗವು ಇತ್ತೀಚೆಗೆ ತನ್ನ ರಜತ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಿಕೊಂಡಿತು.ಕನ್ನಡದ ಖ್ಯಾತ ಸಾಹಿತಿಗಳಾದ ಪ್ರೊ. ದೇಜವರೆಗೌಡ ಹಾಗೂ ನಿತ್ಯೋತ್ಸವದ ಕವಿ ನಿಸಾರ್ ಅಹ್ಮದ್ ಪ್ರಸಾರಾಂಗದ ಬೆಳ್ಳಿ ಹಬ್ಬಕ್ಕೆ ಸಾಕ್ಷಿಯಾದರು.ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರಗನ್ನು ನೀಡುವ ಉದ್ದೇಶದಿಂದ ಸುದರ್ಶನ ವಿಜಯ ಎಂಬ ಯಕ್ಷಪ್ರಸಂಗವನ್ನು ಪ್ರದರ್ಶಿಸಲಾಯಿತು.

ಸ್ವರ್ಗಲೋಕದ ಮಹಾಧೀಪತಿ ಇಂದ್ರನ ಸಿಂಹಾಸನದ ಮೇಲೆ ಸದಾ ಅಸುರರ ಕಣ್ಣು ಹೊಂಚುಹಾಕುತಿದ್ದ ಯುಗವದು. ಸಂಧರ್ಭ ಸಿಕ್ಕಾಗ ದೇವೆಂದ್ರನ ವಿರುದ್ಧ ಯುದ್ದ ಮಾಡಿ ಅಸುರರು ಜಯಶೀಲರಾಗುತ್ತಿದ್ದರು.ಅದರೆ ದೈವ ಬಲದ ಕೊರತೆಯಿಂದಲೂ, ದೇವತೆಗಳ ತಂತ್ರದಿಂದಲೂ ತಾವು ಪಡೆದ ವರದಿಂದಲೆ ಸಂಹಾರವಾಗುವುದು ಅಸುರ ಕುಲದ ಜಾಯಮಾನ. ವರವನ್ನು ಶಾಪವಾಗಿ ಪರಿವರ್ತನೆಗೊಳಿಸುವ ದೇವತೆಗಳ ಚತುರತೆ ನಮ್ಮ ಪುರಾಣಗಳ ಕಥಾ ಹಂದರದೊಳಗಿನ ತಂತ್ರಗಾರಿಕೆಯು ಹೌದು.
ಛಾಯಾಚಿತ್ರ ಚಂದ್ರಶೇಖರ್ ಎಂ.ಬಿ
ಸಾಂದರ್ಭಿಕ ಚಿತ್ರ
ಸ್ವರ್ಗವೆಂಬ ಮಾಯಾಲೋಕದ ಆಧಿಕಾರ ಪಡೆಯಲು ಯತ್ನಿಸುವ ಶತ್ರುಪ್ರಸೂಧನನೆಂಬ ಅಸುರನು ದೇವೆಂದ್ರನನ್ನು ಯುದ್ಧದಲ್ಲಿ ಸಾರಾ ಸಗಟಾಗಿ ಸೋಲಿಸುತ್ತಾನೆ. ಆ ಮೂಲಕ ಸುದರ್ಶನ ವಿಜಯ ಯಕ್ಷಪ್ರಸಂಗದ ಪ್ರಾರಂಭಿಕ ಘಟ್ಟವನ್ನು ಗುರುತಿಸಬಹುದು.

 "ಆಯುದವೊಂದು ಜೀವಾತ್ಮದ ರೂಪವನ್ನು ತಾಳಿ, ತನ್ನನ್ನು ಸಂಹರಿಸಬೇಕೆಂಬ ವರ" ಶತ್ರುಪ್ರಸೂಧನನ ಈ ಬಂಡ ದೈರ್ಯಕ್ಕೆ ಕಾರಣವಾಯಿತು. ಅ ವರದ ಮೂಲಕ ಸಾವನ್ನು ಗೆಲ್ಲುವ ಸಮರ್ಥವಾದ ಪ್ರಯತ್ನವನ್ನು, ಚತುರ ಶೀಲತೆಯ ಮೂಲಕ ತನ್ನ ಪೂರ್ವಿಕರಿಗಾದಂತೆ ತನಗೂ ದೇವಾನು ದೇವತೆಗಳಿಂದ ಕುತಂತ್ರದ ಸಾವು ಬರಬಾರದೆಂದು, ತಾರ್ಕಿಕವಾಗಿ ಯೋಚಿಸಿ ಪಡೆದ ವರವನ್ನು ಚಿರಸ್ಥಾಯಿಗೊಳಿಸಲೆತ್ನಿಸುತ್ತಾನೆ. ಆ ಮೂಲಕ ಶತ್ರು ಪ್ರಸೂಧನನಲ್ಲಿಯ ತಾತ್ವಿಕ ಅಭಿವ್ಯಕ್ತಿಯನ್ನು ಷಡ್ಯಂತರದಿಂದ ಪಾರಾಗುವ ಚಕ್ರವ್ಯೂವದ ಬೇದಕ ನೆಲೆಯಾಗಿ ಗುರುತಿಸಬಹುದು.
ಛಾಯಾಚಿತ್ರ ಚಂದ್ರಶೇಖರ್ ಎಂ.ಬಿ
ಸಾಂದರ್ಭಿಕ ಚಿತ್ರ

ಮುಳ್ಳನ್ನು ಮುಳಿನಿಂದ ತೆಗೆಯಿರಿ ಎಂಬ ಗಾದೆ ಮಾತಿನಂತೆ ಶತ್ರುಪ್ರಸೂಧನ ಪಡೆದ ವರದಿಂದಲೇ ಸಾವು ಎಂಬ ಅಂಶ ಅದಾಗಲೇ ಹರಿಯ ಚಿತ್ತದಲ್ಲಿ ಸಂಕಲ್ಪಿಸಲ್ಪಟ್ಟಿತು. ಅದಕ್ಕಾಗಿ ವಿಷ್ಣು ತನ್ನ ಚಿತ್ತದೊಳಗಣ ನಾಟಕ ರಂಗಕ್ಕೆ ಪಾತ್ರದಾರಿಗಳನ್ನು ಅಯ್ಕೆ ಮಾಡಿಕೊಳ್ಳುತ್ತಾನೆ. ನಿಮಿತ್ತಗಳನ್ನು ಸೃಷ್ಟಿಸುತ್ತಾ ಹೊಸ ಬಗೆಯ ಚರ್ಚೆಗಳನ್ನು ಹುಟ್ಟುಹಾಕುತ್ತಾ, ಸೂತ್ರಧಾರನಂತೆ ಎಲ್ಲವನ್ನು ನಿಯಂತ್ರಿಸಿ, ತಾನು ಮಾಡಲೇತ್ನಿಸಿದ ಕಾರ್ಯತಂತ್ರವನ್ನು ಇತರ ಪಾತ್ರಗಳ ಸ್ಮೃತಿ ಮತ್ತು ಬಲದ ಮೂಲಕ ಮಾಡಿಸುತ್ತಾನೆ.
ಇತ್ತ ವೈಕುಂಠದಲ್ಲಿ ಲಕ್ಷ್ಮಿ ಶೃಂಗಾರ ರಸದಿಂದ ವಿಷ್ಣುವಿನ ಸಾಹಸವನ್ನು ಉದಾತ್ತವಾಗಿ ಕೊಂಡಾಡಿ, ತನ್ನ ಪ್ರೀತಿಯ ಇನಿಯನಾದ ಅಚ್ಯುತ್ತನಲ್ಲಿ ಚ್ಯುತಿ ಇಲ್ಲವೆಂದು ಬಣ್ಣಿಸುತ್ತಾಳೆ. ಸಂಪತ್ತಿನ ಅಧಿ ದೇವತೆಯಾದ ಲಕ್ಷ್ಮಿಯ ಮಾತನ್ನು ಕೇಳಿ ವಿಷ್ಣುವಿನ ಕರದಲ್ಲಿರುವ ಸುದರ್ಶನ ಕೇರಳಿ ಕೆಂಡಾ ಮಂಡಲನಾಗಿ ಜೀವಾತ್ಮದ ರೂಪವನ್ನು ತಾಳುತ್ತಾನೆ.
ಕರದಿಂದ ಕೇಳಗಿಳಿದು ತನ್ನ ತಾಯಿಯಾದ ಲಕ್ಷ್ಮಿಯ ಜೊತೆ ಸುದರ್ಶನ ವಾಕ್ ಯುದ್ಧ ಮಾಡಿ, ವಿಷ್ಣು ಇದುವರೆಗೂ ಮಾಡಿದ ಎಲ್ಲಾ ಸಾಹಸಭೂಷಿತ ಯುದ್ದಾಂತ ಅಸುರ ವಧೆಗಳಿಗೆ ತಾನೇ ಕಾರಣ ಹೊರತು ವಿಷ್ಣು ಬರೀಯ ನಿಮಿತ್ತ ಮಾತ್ರ ಎಂದು ತನ್ನ ವ್ಯಕ್ತಿತ್ವದಲ್ಲಿ ಅಡಗಿದ ನಾನು ಎಂಬ ಅಹಂಕಾರದ ಮಾನವೀಯ ಸ್ವಭಾವವನ್ನು ಅಭಿವ್ಯಕ್ತಿಸಿದ. ಈ ಮಾತುಗಳನ್ನು ಕೇಳಿ ಶಾಂತ ಚಿತ್ತದಿಂದ ವಿಷ್ಣು ಮುಗುಳ್ನಕ್ಕನು.
ಛಾಯಾಚಿತ್ರ ಚಂದ್ರಶೇಖರ್ ಎಂ.ಬಿ
ಸಾಂದರ್ಭಿಕ ಚಿತ್ರ
ಕೋಪಗೊಂಡ ಲಕ್ಷ್ಮಿ ವಿಷ್ಣು ಅವತಾರ ಪುರುಷನಾಗಿದ್ದ್ದಾಗ ನೀನೆಲ್ಲಿದ್ದೆ? ಎಂದು ತನ್ನ ಅಗ್ನಿಯಂತಹ ಪ್ರಶ್ನೆಯನ್ನು ಕೇಳಿದಳು. ವಿಷ್ಣುವಿನ ಮತ್ಸ್ಯಾವತಾರದಲ್ಲಿ ಮತ್ಸ್ಯದ ರೆಕ್ಕೆಯಲ್ಲಿಯು, ಕೂರ್ಮಾವತಾರದಲ್ಲಿ ಚಿಪ್ಪುವಿನಲ್ಲಿಯು, ವರಹಾವತಾರದಲ್ಲಿ ವರಹದ ದಾಡೆಯಲ್ಲಿಯು, ನರಸಿಂಹಾವತಾರದಲ್ಲಿ ಕರಗಳ ನಕದಲ್ಲಿಯು, ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ನುಕಿದ ಬ್ರಾಹ್ಮಣಾವತಾರದಲ್ಲಿ ಬ್ರಾಹ್ಮಣಬಾಲಕನ ಪಾದದಲ್ಲಿಯು ನಾನಿದ್ದೆ ಎಂದು ಗರ್ವದಿಂದ ಎದೆತಟ್ಟಿ ಸುದರ್ಶನ ನುಡಿದನು.
ವಿಷ್ಣು ಸುದರ್ಶನ ಹೇಳಿದ ಮಾತು ಸತ್ಯವೆಂದು ಅನುಮೋದಿಸುತ್ತಾನೆ. ಇನ್ನೂ ಮುಂದೆ ತಾನು ಇಂತಹ ಸಣ್ಣ ಪುಟ್ಟ ಯುದ್ಧ ಮಾಡುವುದಿಲ್ಲವೆಂದು, ತನಗೆ ದೊಡ್ಡ ಯುದ್ದಗಳಿದ್ದರೆ ಹೇಳಿ ಕಳುಹಿಸುವಂತೆ ನುಡಿದು ಸುದರ್ಶನ ತೆರಳುತ್ತಾನೆ. ಸುದರ್ಶನನ ಅಹಂನನ್ನು ಸುಟ್ಟುಹಾಕಲು ವಿಷ್ಣು ಜೇಡರ ಬಲೆಯಂತೆ ತಂತ್ರೋಪಾಯವನ್ನು ರಚಿಸಿದ.

ಮಾನವನಿಗೆ ಭೂಮಿಯಲ್ಲಿರುವ ಸುಖವು ದೇವತೆಗಳಿಗಿಲ್ಲ. ಬಾಯಾರಿದಾಗ ನೀರು ಸಿಕ್ಕರೆ ಸುಖದ ಉನ್ಮಾದವೆ ಬೇರೆ. ಸ್ವರ್ಗದಲ್ಲಿ ಬಾಯಾರಿಕೆ ಇಲ್ಲದಿರುವ ಕಾರಣದಿಂದ ನೀರು ಕುಡಿಯುವ ಸುಖವು ದೇವತೆಗಳಿಗಿಲ್ಲ. ಈಗ ಸುಖ ಪಡಲು ಸ್ವರ್ಗವನ್ನೆ ತಾನು ಕಳೆದುಕೊಂಡಿರುವುದಾಗಿ ದೇವೆಂದ್ರನು ಮಹಾ ವಿಷ್ಣುವಿನಲ್ಲಿ ಭಿನ್ನವಿಸಿಕೊಳ್ಳುತ್ತಾನೆ. ಸ್ವರ್ಗವನ್ನು ಅಸುರ ಶತ್ರುಪ್ರಸೂಧನನಿಂದ ವಿಮುಕ್ತಗೊಳಿಸಿಕೊಡುವಂತೆಯು, ಅತನನ್ನು ವದಿಸುವಂತೆಯು ಮನವಿಯನಿತ್ತನ್ ಅ ಸ್ವರ್ಗಾಧಿಪತಿ.
ದೇವೆಂದ್ರನ ಭಿನ್ನಹವನ್ನು ಸ್ವೀಕರಿಸಿದ ವಿಷ್ಣು ರಾಕ್ಷಸನ ಸಂಹಾರಕ್ಕೆ ಲೋಹವತಿ ಪಟ್ಟಣಕ್ಕೆ ಅಗಮಿಸುತ್ತಾನೆ. ರಣರಂಗದಲ್ಲಿ ಶತ್ರುಪ್ರಸೂಧನ ತನಗೆ ನೀಡಿದ ವರದ ಸಾಂಸ್ಥಿಕ ಧೋರಣೆ ಮತ್ತು ಸಾವು ಅಷ್ಟು ಸುಲಭದಲ್ಲಿ ತನ್ನನ್ನು ಎದುರುಗೊಳ್ಳಲು ಸಾಧ್ಯವಿಲ್ಲವೆಂದು ವಿಷ್ಣುವನ್ನು ಮೂದಲಿಸುತ್ತಾನೆ.

ಛಾಯಾಚಿತ್ರ ಚಂದ್ರಶೇಖರ್ ಎಂ.ಬಿ
ಸಾಂದರ್ಭಿಕ ಚಿತ್ರ
 
ಕ್ರೋದಗೊಂಡ ವಿಷ್ಣು ತನ್ನ ನಾಟಕೀಯತೆಯ ಮೂಲಕ, ವರವನ್ನು ಶಾಪವಾಗಿ ಪರಿವರ್ತಿಸಲು ಅಯುಧವಾಗಿಯು ಜೀವಾತ್ಮವಾದ ಸುದರ್ಶನಲ್ಲಿ ಅಜ್ಞಾಪಿಸುವನು, ಸುದರ್ಶನ ಶತ್ರುಪ್ರಸೂಧನನನ್ನು ಸಂಹರಿಸಿ ವಿಷ್ಣುವಿನ ಬಳಿ ಬರುತ್ತಾನೆ.
ವಿಷ್ಣು ತನ್ನ ಕರವನ್ನು ಸೇರುವಂತೆ ಸುದರ್ಶನನಿಗೆ ಆದೇಶಿಸಿದಾಗ, ಒಲ್ಲೆ ಎಂಬಂತೆ ಸುದರ್ಶನ ತನ್ನ ಮದವನ್ನು ಅಭಿವ್ಯಕ್ತಿಸಿ ತಿರಸ್ಕರಿಸುವನು. ಮಹಾ ವಿಷ್ಟುವಿನ ಕರಗಳ ಸುದರ್ಶನ ಜೀವಾತ್ಮದ ರೂಪದಲ್ಲಿ ಅಹಂಕಾರ ಪಟ್ಟರೆ ಹರಿಯು ಸುಮ್ಮನಿರುವ ಸ್ವಾಮಿಯೇ? ಖಂಡಿತವಾಗಿಯು ಇಲ್ಲ ಸುದರ್ಶನ ಹರಿಯ ಕರದಲ್ಲಿ ಐಕ್ಯವಾಗದೆ, ಸ್ವಾತಂತ್ರ್ಯನಾಗಲು ಯತ್ನಿಸಿದ್ದು ಹರಿಯ ಕ್ರೋದಕ್ಕೆ ಕಾರಣವಾಯಿತು. ಭೂಲೋಕದಲ್ಲಿ ಮಾನವನಾಗಿ ಹುಟ್ಟಿ ನಿನ್ನ ಅಹಂಕಾರವನ್ನು ಕಳೆ ಎಂದು ಹರಿ ಶಾಪವನೀತ್ತ. ಡವಾಗಿ ತನ್ನ ತಪ್ಪನ್ನು ಅರ್ಥಯಿಸಿಕೊಂಡ ಸುದರ್ಶನ ತನ್ನ ಸ್ವಾಮಿಯಲ್ಲಿ ಶಾಪವನ್ನು ಮನ್ನಿಸುವಂತೆ ಭಿನ್ನಯಿಸಿಕೊಳ್ಳುತ್ತಾನೆ. ಕೊನೆಗೆ ಸುದರ್ಶನನ ಪ್ರಲಾಪ ಸಹಿಸಲಾಗದೆ  ಕ್ಷಾತ್ರ ವಂಶದಲ್ಲಿ ಅಗ್ನಿ ಮಹರ್ಷಿಯ ಮಗನಾಗಿ ಹುಟ್ಟು ಅಲ್ಲಿ ನಾನು ನಿನಗೆ ಗುರುವಾಗಿ ನಿನ್ನ ಅಹಂಕಾರವನ್ನು ವಿರಕ್ತಿಗೊಳಿಸುವುದಾಗಿ ವಿಷ್ಣು ನುಡಿಯುತ್ತಾನೆ.
ಇಡೀ ಯಕ್ಷಪ್ರಸಂಗದ ಅಭಿವ್ಯಕ್ತಿಯ ನೆಲೆಯು ಮಾನವ ಸಹಜವಾದ ಅಹಂಕಾರದ ಪರಿಕಲ್ಪನೆಯನ್ನು ಜೀವಾತ್ಮವಾದ ಅಯುಧ ಒಂದರಲ್ಲಿ ಒಡಮೂಡಿದಾಗ ಅದನ್ನು ಛೀದ್ರಗೊಳಿಸಿ, ಸಾಂಸ್ಕೃತಿಕ ಸ್ಥಾನ ಮಾನಗಳನ್ನು ಎತ್ತಿ ಹಿಡಿಯುವ ಕೆಲವನ್ನು ಮಾಡಲಾಗಿದೆ.
 ತಮ್ಮ ಸಾಮಥ್ರ್ಯಕ್ಕನುಗುಣವಾಗಿ ತಮ್ಮ ಸ್ಥಾನ ಮಾನವನ್ನು ಕಂಡುಕೊಳ್ಳಬೇಕೆಂಬ ನೀತಿ ಪಾಠದೊಂದಿಗೆ, ಒಂದು ತಂತ್ರ ಎರಡು ಭಿನ್ನ ಅಯಾಮಗಳಲ್ಲಿ ಸುದರ್ಶನನ ಪರಾಕ್ರಮದ ಮೂಲಕ ಶತ್ರುಪ್ರಸೂಧನನ ಸಂಹಾರ ಮತ್ತು ವಿಷ್ಣುವಿನಿಂದ ಸುದರ್ಶನನ ಅಹಂಕಾರದ ನಿರಶನವನ್ನು ಕಾಣಬಹುದಾಗಿದೆ.
 ಸುದರ್ಶನ ವಿಜಯ ಯಕ್ಷ ಪ್ರಸಂಗದ ಭಾಗವತಿಕೆಯನ್ನು ಗಾನಕೋಗಿಲೆ ದಿನೇಶ್ ಅಮ್ಮಣ್ಣಾಯರವರು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಶಶಿಧರ್ ಕುಲಾಲ್ ಸುದರ್ಶನನ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಷ್ಣುವಾಗಿ ವಿಷ್ಣು ಶರ್ಮರವರು ಮನೋಜ್ಞವಾಗಿ ಅಭಿನಯವನ್ನಿತ್ತಿದ್ದಾರೆ. ದೇವೆಂದ್ರನಾಗಿ ರವಿರಾಜ್ ಭಟ್, ಬಲಗಳಾಗಿ ಲೋಕೇಶ್ ಮಚ್ಚೂರು ಮತ್ತು ಚಿನ್ಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.
 
ಮುಸ್ತಫ .ಕೆ. ಹೆಚ್
ಪ್ರಥಮ ಎಂ.ಎ.ಕನ್ನಡ ವಿಭಾಗ
ಎಸ್. ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ
ಮಂಗಳಗಂಗೋತ್ರಿ,
ಮಂಗಳೂರು

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ