ಗುರುವಾರ, ಮಾರ್ಚ್ 19, 2015

ನಮ್ಮ ಕ್ರಿಯೇಟಿವಿಟಿ-ನಾವು ಕ್ರಿಯೇಟರ್ಸ್ ಒಮ್ಮೋಮ್ಮೆ ಟ್ರೆಂಡ್ ಸೆಟ್ಟರ್ಸ್


ಇಂದಿನ ಯುತ್ ಜನರೇಷನ್ ತುಂಬಾನೆ ಫಾಸ್ಟ್ ಅಂಡ್ ಸ್ಮಾರ್ಟ್.ಇತರರಿಗಿಂತ ತಾವು ಭಿನ್ನ ಎಂದು ಗುರುತಿಸಿಕೊಳ್ಳಲು ವಿಭಿನ್ನ ಸಾಹಸಕ್ಕೆ ಕೈ ಹಾಕುವ ಮೂಲಕ ಹೊಸ ಬಗೆಯ ಚಿಂತನೆಗಳಿಗೆ, ಪ್ರಯೋಗಶೀಲತೆಗೆ ಕ್ರಿಯೇಟರ್ಗಳಾಗಿ ಹೊರ ಹೊಮ್ಮವುದನ್ನು ಗುರುತಿಸಬಹುದು.ಸದಾ ತಾವು ಮಾಡುವ ಕೆಲಸದಲ್ಲಿ ಹೊಸತನ್ನು ತರಲು ತುಡಿಯುವ ಯುವ ಮನಸ್ಸುಗಳಿಗೆ ಕ್ಯಾಂಪಸ್ಗಳೆ ಕ್ರಿಯೇಟಿವ್ ಕ್ರಾಂತಿಯ ವೇದಿಕೆ.ಸ್ನೇಹಿತ ವಲಯದೊಂದಿಗೆ ಹರಟೆ,ಚರ್ಚೆಗಳಲ್ಲಿ ತೋಡಗಿಕೊಳ್ಳುವ ಮೂಲಕ ಸಮಾನ ಮನಸ್ಕ ವಿಚಾರಧಾರೆಗಳು ಒಡಮೂಡಿ, ಹೊಸ ಬಗೆಯ ಸವಾಲನ್ನು ಎದುರು ನೋಡುತ್ತಾ ಅದನೆದುರಿಸಲು ಸದಾ ಸಿದ್ದರಿರುತ್ತಾರೆ.ಅಭಿವ್ಯಕ್ತಗೊಂಡ ಹೊಸ ವಿಚಾರವನ್ನು ಎಕ್ಸಿಕ್ಯುಟ್ ಮಾಡಿ ಅದರಿಂದ ಸಫಲತೆಯನ್ನು ಗಳಿಸುತ್ತಾರೆ.
ಒಂದಾನೊಂದು ಕಾಲದಲ್ಲಿ ಸಾಕ್ಷ್ಯ ಚಿತ್ರ (ಡಾಕ್ಯುಮೆಂಟರಿ), ಕಿರುಚಿತ್ರಗಳನ್ನು ಪರಣಿತರು,ಅದಕ್ಕಾಗಿ ರೂಪಿತವಾದ ಫಿಕ್ಷನ್ ಸಂಸ್ಥೆಗಳು ರೂಪಿಸುತ್ತಿದ್ದವು. ಅದರೆ ಇಂದು ಕ್ಯಾಂಪಸ್ನ ಕ್ಯಾಂಟಿನ್ನಲ್ಲಿ ಬಿಸಿ-ಬಿಸಿ ಚಹಾ ಇರುತ್ತಾ ಪ್ರಸ್ತುತ ಸಿನಿಮಾಗಳ ಬಗ್ಗೆ ಕಮೆಂಟ್ಸ್ ಮಾಡುವಾಗ ಅನಿರೀಕ್ಷಿತವಾಗಿ ಸಾಕ್ಷ್ಯ ಚಿತ್ರವನ್ನು ತಾವೇ ತಯಾರಿಸುವ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ಪಡ್ಡೆ ಹೈಕ್ಲು ತಮ್ಮ ಬಳಿ ಇರುವ ಕ್ಯಾಮರಾ, ಲ್ಯಾಪ್ಟಾಫ್ ಬಳಸಿ ತಾವೇ ಸ್ಕ್ರಿಪ್ಟ್ ಬರೆದು, ಎಡಿಟಿಂಗ್ ಮಾಡಿ ಹೆಚ್ಚಿನ ವೆಚ್ಚವಿಲ್ಲದೆ ಸಿಂಪಲ್ಲಾಗಿ, ಗಾಡವಾದ ವಿಚಾರವನ್ನು ತೆರೆಗೆ ತರುತ್ತಾರೆ. ಅ ಮೂಲಕ ಅವರು ತಾಂತ್ರಿಕವಾಗಿಯೂ, ಸಾಹಿತ್ಯಕವಾಗಿಯೂ ಪ್ರಭುದ್ದರಾಗಿ ಸಿನಿಮಾ ಕ್ಷೇತ್ರದ ಕಡೆ ಅಕರ್ಷಿತರಾಗುವುದನ್ನು ಕಾಣಬಹುದು.
ಇನ್ನೂ ಇಂಟರ್ನೇಟ್ ನಮ್ಮಂತಹ ಯುವಕರ ಅಚ್ಚುಮೆಚ್ಚಿನ ಕ್ಷೇತ್ರ. ಸಾಮಾನ್ಯವಾಗಿ ಇತ್ತೀಚೆಗೆ ಯುವಕರು ಹೆಚ್ಚಾಗಿ ವಾಟ್ಸ್ ಅಫ್, ಫೇಸ್ ಬುಕ್ನಲ್ಲಿ ಕಾಲಹರಣ ಮಾಡುತ್ತಾರೆಂಬ ಋಣಾತ್ಮಕ ಅಂಶಗಳು ಕೆಳಿಬರುತ್ತಿದೆಯೇ ಹೊರತು,ಯುವಕರು ಇದೆ ಅನ್ ಲೈನ್ ಜಗತ್ತನ್ನು ಬಳಸಿಕೊಂಡು ಫ್ರೀಲಾನ್ಸ್ ಪತ್ರಕರ್ತರಾಗಿಯು, ಕಂಟೆಂಟ್ ಮತ್ತು ಟೆಕ್ನಿಕಲ್ ರೈಟರ್ ಆಗಿಯು ಕಾರ್ಯನಿರ್ವಹಿಸುತ್ತಿರುವುದನ್ನು ಯಾರು ಗಮನಿಸಲಿಲ್ಲ.ವಿದ್ಯಾರ್ಥಿ ದೀಸೆಯಲ್ಲಿ ಬರವಣಿಗೆಯನ್ನು ಪ್ರಕರವಾಗಿ ಅಭಿವ್ಯಕ್ತಿಸಲು ಅನ್ ಲೈನ್ ತಾಣಗಳು ಸಹಕಾರಿಯಾಗಿದೆ. ಪ್ರತಿ ಲೇಖನಗಳಿಗೂ ಇಂತಿಷ್ಟು ಪ್ರೋತ್ಸಾಹ ಧನ ದೊರೆಯುದರಿಂದ ಬರಹದೊಂದಿಗೆ ಕ್ಯಾಂಪಸ್ನ ಚಿಲ್ಲರೆ ಖಚರ್ುಗಳಿಗೆ ಪಾಕೇಟ್ ಮನಿ ದೊರೆತಂತಾಗುತ್ತದೆ.ಪ್ರಸ್ತುತ ಕಾಲೇಜು ಮಟ್ಟದ ಪತ್ರಿಕೋದ್ಯಮ ಮತ್ತು ಸಾಹಿತ್ಯದ ಯುವ ವಿದ್ಯಾರ್ಥಿಗಳು ವಿಭಾಗವಾರು ಬ್ಲಾಗ್ ರಚಿಸಿ ತಮ್ಮ ಲೇಖನ,ಕಥೆ,ವಿಮರ್ಶೆ,ಅಭಿಪ್ರಾಯ,ವರದಿಗಳನ್ನು ಬಿತ್ತರಿಸುವುದನ್ನು ಕಾಣಬಹುದು.
ಅಲ್ಲದೇ ಕ್ಯಾಂಪಸ್ಗಳ ಕಣ್ಗಾವಲಿನಂತೆ ಕಾರ್ಯನಿರ್ವಹಿಸುವ ಪ್ರಾಯೋಗಿಕ ವಿದ್ಯಾರ್ಥಿ ಭಿತ್ತಿ ಪತ್ರಿಕೆಗಳನ್ನು,ವಾರ್ಷಿ ಕಾಂಕಗಳನ್ನು ಸಮಾನ ಮನಸ್ಕ ಯುವಕರು ಅಸಕ್ತಿ ಮತ್ತು ಮುತುವರ್ಜಿಯಿಂದ ಪ್ರಾರಂಭಿಸಿ, ಹೆಚ್ಚಿನ ಯಶಸ್ಸನ್ನು ಗಳಿಸಿಕೊಂಡಿರುವುದನ್ನು ಕಾಣಬಹುದಾಗಿದೆ.ಅ ಮೂಲಕ ಅವರಲ್ಲಿ ಸಂಪಾದಕ, ಉಪಸಂಪಾದಕ, ವಿನ್ಯಾಸಕಾರ, ಹಾಗೂ ಉತ್ತಮ ಬರಹಗಾರರು  ಹುಟ್ಟಿಕೊಳ್ಳಲು ಸಾಧ್ಯ.
ಹುಚ್ಚು ಮನಸ್ಸಿನ ಹೊಳೆಯಲ್ಲಿ ಜಾಲಿ ಮೂಡಿನ ಯುವ ಸಮೂಹ ತಮ್ಮ ಸಾಹಸ ಮತ್ತು ಫ್ರೌಡಿಮೆಯನ್ನು ಪ್ರದರ್ಶಿ ಸುವ ಸಲುವಾಗಿ ಹಳೆ ಮಾದರಿಯ ಬುಲೆಟ್ ಬೈಕ್ಗಳನ್ನು ರಂಗು ರಂಗು ಬಣ್ಣಗಳಿಂದ ಕಂಗೋಳಿಸುವಂತೆ ಮಾಡಿ ಸಾವಿರಾರು ಮೈಲು ದೂರಗಳವರೆಗೆ ಕ್ರಮಿಸಿ ಸಾಹಸ ಮೆರೆಯುತ್ತಾರೆ.ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೇಸ್ಗಳಲ್ಲಿ ಭಾಗವಹಿಸುವ ಯುತ್ಸ್ಗಳನ್ನು ಕಾಣಬಹುದು.ತಮ್ಮ ಸಂಗಡಿಗರೊಂದಿಗೆ ಬೆಟ್ಟ ಗುಡ್ಡ,ಕಾಡು ಮೇಡುಗಳಿಗೆ ತೆರಳಿ ಟ್ರಕಿಂಗ್ ಎಂಬ ಸಾಧನೆಯ ಹಾದಿಯನ್ನು ತುಳಿಯುತ್ತಾರೆ.ಇದಕ್ಕೆಲ್ಲ ಸ್ನೇಹಿತರೆಂಬ ಒಕ್ಕೂಟ ವ್ಯವಸ್ಥೆಯೆ ಕಾರಣ. ದೇಶ ಸುತ್ತು ಕೋಶ ಓದು ಎಂಬ ತತ್ವ ಚಿಂತನೆಗಳನ್ನು ಆಧುನಿಕ ಯುವ ಸಮೂಹ ಚಾಚು ತಪ್ಪದೆ ಪಾಲಿಸುವ ಮೂಲಕ, ನೈತಿಕವಾಗಿ ಯುವ ಸಮೂಹ ಪ್ರಬುಧ್ಧಗೊಳ್ಳುವುದನ್ನು ಕಾಣಬಹುದು.
ದಿನದಿಂದ ದಿನಕ್ಕೆ ಬಣ್ಣಗಳ ಕಡೆಗೆ ಯುವಕರು ಹೆಚ್ಚು ಅಕರ್ಷಿತರಾಗುತ್ತಿದ್ದಾರೆ. ಸ್ಪ್ರೇ ಪೆಂಟ್ಗಳನ್ನು ಬಳಸಿಕೊಂಡು ರಸ್ತೆಯ ಮೇಲೆ, ಇಕ್ಕೆಲಗಳಲ್ಲಿ ಬಣ್ಣ ಬಣ್ಣದ ಚಿತ್ತಾರಗಳನ್ನು ಒಡಮೂಡಿಸುವ ಯುವಕರ ಈ ಅಸಕ್ತಿಗೆ ಸ್ಟ್ರೀಟ್ಪೆಂಟ್ ಎಂದು ಹೆಸರು. ವಿದೇಶದಲ್ಲಿ ಹೆಚ್ಚು ಪ್ರಸಿದ್ದವಾಗಿರುವ ಈ ಕಲೆಯನ್ನು ಭಾರತದ ವಿದ್ಯಾರ್ಥಿಗಳು ಕಲಿತು ಹಲವಾರು ಕ್ಯಾಂಪಸ್ಗಳ ಸೌಂದರ್ಯ ಹೆಚ್ಚಿಸಿದ್ದಾರೆ.
ಸಾಹಿತ್ಯ ಮಾತ್ರವಲ್ಲದೆ ಸಂಗೀತದ ಹಳೆಯ ಪರಿಕಲ್ಪನೆಗೆ ಹೊಸ ಬಗೆಯ ಕಾಯಕಲ್ಪವನ್ನು ನೀಡಿರುವ ಕ್ಯಾಂಪಸ್ ಸಿಂಗರ್ಸ್ಗಳು ತಮ್ಮದೆ ಅದ ಬ್ಯಾಂಡ್ಗಳನ್ನು ಕಟ್ಟಿಕೊಂಡು,ತಾವೇ ಬರೆದ ಸಾಹಿತ್ಯಕ್ಕೆ ತಾವೇ ಸಂಗೀತ ನೀಡಿ,ತಮ್ಮ ದ್ವನಿಯಲ್ಲಿಯೇ ಹಾಡಿ ಪಾಪ್ಯೂಲರ್ ಅದ ಎಷ್ಟೊ ಘಟನೆಗಳು ನಮ್ಮ ಸುತ್ತಲಿದೆ.ಬ್ಯಾಂಡ್ಗಳು ನೀಡುವ ಕಾರ್ಯಕ್ರಮದಿಂದ ಬಂದ ಹಣವನ್ನು ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ವಿವಿಧ ಉದ್ದೇಶಗಳಿಗಾಗಿ ಬಳಸುವುದನ್ನು ಕಾಣಬಹುದು.ಇಷ್ಟು ಮಾತ್ರವಲ್ಲದೆ ಕ್ಯಾಂಪಸ್ಗಳಲ್ಲಿ ರಾಜಕೀಯ ಚಿಂತನೆಗಳ ಕಡೆಗೂ ವಿದ್ಯಾರ್ಥಿಗಳು ಒಲವನ್ನು ತೋರಿಸುತ್ತಿದ್ದಾರೆ. ಅ ಮೂಲಕ ಮತದಾನದಂತಹ ಪ್ರಕಿಯೇಗಳಲ್ಲಿ, ಮತದಾನಕ್ಕಾಗಿ ಇತರರನ್ನು ಪ್ರೋತ್ಸಾಹಿಸುವ ಜನಜಾಗೃತಿಯ ಕೆಲಸವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.
ಕೆಲವೊಮ್ಮೆ ಕ್ಯಾಂಪಸ್ಗಳಲ್ಲಿ ಒಳ್ಳೆಯ ಉದ್ದೇಶಕ್ಕಾಗಿ ಪ್ರತಿಭಟನೆಗಳು ಸಂಭವಿಸಿದಾಗ ಕ್ರಿಯೇಟಿವ್ ಸ್ಲೋಗನ್ಸ್, ಮತ್ತು ವಿಭಿನ್ನ ವೇಶಭೂಷಣಗಳ ಮೂಲಕ ಪ್ರತಿಭಟಿಸುವ ಕಲಾತ್ಮಕವಾದ ಮುಷ್ಕರಗಳನ್ನು,ರಸ್ತೆ ಸಪ್ತಾಹಗಳನ್ನು ಆಧುನಿಕ ಯುವ ಸಮೂಹ ರೂಪಿಸುವುದನ್ನು ಗಮನಿಸಬಹುದು.
ಒಟ್ಟಿನಲ್ಲಿ ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ, ನಾಟಕ, ಕಲೆ, ಪ್ರವಾಸ, ಬರಹ, ಚಿತ್ರಕಲೆ, ಇತ್ಯಾದಿ ಅಂಶಗಳನ್ನು ತಮ್ಮ ಕ್ರಿಯೇಟಿವ್ ಚಿಂತನೆಗಳ ಮುಖವಾಣಿಯಾಗಿಸಿ ತಮ್ಮ ಪ್ರತಿಭೆಗಳನ್ನು ಅಭಿವ್ಯಕ್ತಿಸುವ ಕ್ಯಾಂಪಸ್ ಚಿಂತಕರ ಟ್ಯಾಲೆಂಟ್ಸ್ಗಳನ್ನು ಇಲ್ಲಿ ಸ್ಮರಿಸಿಕೊಳ್ಳಲೆ ಬೇಕು. ಇದು ವಿದ್ಯಾರ್ಥಿಗಳ ಭೌದ್ಧಿಕ ಸ್ವಾವಲಂಬನೆಯ ಪ್ರತೀಕವೆಂದರೆ ತಪ್ಪಾಗಲಾರದು.

ಮುಸ್ತಫ .ಕೆ ಹೆಚ್,
ಪ್ರಥಮ ಎಂ ಎ ಕನ್ನಡ ವಿಭಾಗ,
ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ,
ಮಂಗಳಗಂಗೋತ್ರಿ,
ಮಂಗಳೂರು 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ